ಸೂರ್ಯ ಪಶ್ಚಿಮದೆಡೆ ಬೆಟ್ಟದಾಚೆ
ನಿಶ್ಶಬ್ಧವಾಗಿ
ಕರುಗುತ್ತಲಿದ್ದನು
ರಾಸುಗಳ
ಹೆಜ್ಜೆಯ ಸದ್ದಿನ ಹಿಂದೆ
ಬದುಕಿನ
ಬಂಡಿ ನೆಮ್ಮದಿಯಾಗಿ ಸಾಗುತಿತ್ತು ॥
ದಿನವಿಡೀ
ದೇಹ ದಣಿದಿದ್ದರೂ
ಮನದೊಳಗಿತ್ತು
ಮಣ್ಣಿನ ಶಾಂತಿ;
ಬೆವರ
ಹನಿಗಳಲ್ಲೇ ಕಂಡವನು
ನಿರಾಳ
ಬದುಕು, ನಿಜ ಸಂಪತ್ತು ॥
ಅದು, ಶ್ರಮದ
ನೆಮ್ಮದಿಯ ಜೀವನ!
ಪರೋಪಕಾರಿ
ಸಾರ್ಥಕತನದ
ಕಾಯಕದಲ್ಲೇ
ತಪಸ್ಸು ಕಂಡವನು
ಭೂಮಿತಾಯಿಯೇ
ದೇವರೆಂದು ನಮಿಸಿದವ ॥
ಆಸರೆಯೇ
ಉಸಿರಿಗೆ ಕೈಕೋಲು
ಕುಟುಂಬದ
ಭರವಸೆಯೂ ಇತ್ತು
ಇಡುವ
ಮುಂದಿನ ದೃಢ ಹೆಜ್ಜೆಗಳಲ್ಲಿ
ನಾಳೆಯ
ಬದುಕಿನ ಹೊಂಗನಸಿತ್ತು ॥
ಗೋಧೂಳಿ
ಸಮಯದ ಬೆಳಕಿನೊಳಗೆ
ಅವನ
ನೆರಳು ಬೆಳೆಯುತಿತ್ತು
ಆ
ನೆರಳಿನಷ್ಟು ಉದ್ದವಾಗಿದ್ದವು
ಅವನ
ಮೌನದ ಅನುಭವಗಳು ॥
ನಗರ
ಗದ್ದಲದ ಗೋಜುಗಳಾಚೆ
ಸರಳ
ಬದುಕಿನ ಸಾಧಕ ಅವನು
ತನ್ನ
ಹೊಟ್ಟೆಗಿಂತ ಮೊದಲೇ
ಮೂಕಜೀವಿಗಳ
ಹೊಟ್ಟೆ ತುಂಬಿಸುವವ ॥
ಮನೆಸೇರುವ
ಕನಸೊತ್ತು ದಾರಿಯಲ್ಲಿ...
ಅವನ
ಬದುಕೆ ಕಾವ್ಯವಾಗಿತ್ತು
ಅವನ
ಕಾಯಕವೇ ಗೀತೆಯಾಗಿತ್ತು
ಯೋಗಿಯಂತೆ
ಸಾಗಿದ ಮೌನದಲ್ಲಿ ॥
~
ಬರಹ:
✍️ *ಅಮರ್ಜಾ* - ಅಮರೇಗೌಡ ಪಾಟೀಲ ಜಾಲಿಹಾಳ, - ಮೊ. 9900504639
All Rights Reserved: The complete rights of this column belong to 'RanagalNewz'. Republishing parts or the entirety of this article without prior permission is unlawful. Copyright © 2026
