ಅದರಲ್ಲೆ ಬದುಕಿದೆ

 ಗುರುನಮನ


ವಿನಯದ ಮಾತು ಬೆಳೆಸಿದ ಗುರು

ನಿಶ್ಶಬ್ದದಲ್ಲೂ ದಾರಿ ತೋರಿದವರು;

ನೇರ ನೋಟದ ಜೀವನಪಾಠ

ಸರಳತೆಯ ಬೆಳಕು ಹಚ್ಚಿದವರು ॥

 

ಕ್ಲಿಷ್ಟತೆಯ ಹಾದಿ ತೊರೆದು

ಸಾಧುತನದ ದಾರಿ ತೋರಿಸಿ;

ಯಾರಿಗೂ ಕೇಡಿಲ್ಲದ ನಡೆಗೆ

ಮನದ ಬಲವ ತುಂಬಿದವರು ॥

 

ಅಗತ್ಯವಿಲ್ಲದ ಕಡೆ ಸುಳ್ಯಾಕೆ?”

ಎಂದು ಪ್ರಶ್ನೆ ಕಲಿಸಿದವರು;

ನಾನಿಲ್ಲದ ಜಗತ್ತಿಗೆ ಯಾವ ಬೆಲೆ?”

ಎಂಬ ಚಿಂತನೆ ಬಿತ್ತಿದವರು ॥

 

ಅವಸರವಿಲ್ಲದ ಮಾತಿನೊಳಗೆ

ಸತ್ಯದ ತೂಕವ ಹೊತ್ತವರು;

ಸಾಧ್ಯವಾದಷ್ಟು ಸಹಾಯಹಸ್ತ

ಮೌನವಾಗಿ ನೀಡಿದವರು ॥

 

ಇಂದು ನಾ ನಡೆಯುವ ದಾರಿಯಲ್ಲಿ

ಅವರ ನೆರಳೇ ಜೊತೆಗಿದೆ;

ವಿನಯದಿಂದ ಶಿರಬಾಗಿ ಗುರುವಿಗೆ

ನಮನ—ಅದರಲ್ಲೆ ಬದುಕಿದೆ ॥

                

ಬರಹ:

✍️ *ಅಮರ್ಜಾ* - ಅಮರೇಗೌಡ ಪಾಟೀಲ ಜಾಲಿಹಾಳ, - ಮೊ. 9900504639



All Rights Reserved: The complete rights of this column belong to 'RanagalNewz'. Republishing parts or the entirety of this article without prior permission is unlawful. Copyright © 2026


 👉 ಶ್ರೀ ಡಿ.ಆರ್ ಜ್ಯೋತಿಯವರಿಗೆ ಈ ಕವನ ಅರ್ಪಣೆ.

    


Post a Comment

Previous Post Next Post