ಕಳೆದುಕೊಂಡ ವೈಭವ
ಸಂಕಟಗಳೆಂದು ನಾವೆಲ್ಲ ಭಾವಿಸಿ
ಅವಿಭಕ್ತ ಕುಟುಂಬಗಳನ್ನೇ
ತ್ಯಜಿಸಿ,
ನಮ್ಮೆದೆಯೊಳ್ ಹುದುಗಿದ ದಾಹವು
ಮತ್ತಾವುದೋ ಧಾವಂತದೋಳ್
'ಸಂತೆಯ ಹೊತ್ತಿಗೆ ಮೂರುಮಳ
ನೇಯ್ದಂತೆ'.
ಎಲ್ಲದಕ್ಕಿಂತ ಮಿಗಿಲು;
ತಂದುಕೊಡುತ್ತಿದ್ದ ಆ
ಪುಟ್ಟಪುಟ್ಟ
ಸಂತೋಷಗಳನ್ನು, ಮುಗ್ಧತೆಯನ್ನು
ಗೊತ್ತಿಲ್ಲದೆ
ಕಳೆದುಕೊಂಡಿದ್ದೇವೆ ನಾವೆಂದೋ!
ಸಂಬಂಧಗಳ ನೆರಳು ಕಮ್ಮಿಯಾದಂತೆ,
ಆತ್ಮೀಯ ಸ್ನೇಹಗಳೂ
ಅಪರೂಪವಾಗುತ್ತ ಹೋದವು.
ಇನ್ನಾದರೂ ತಡವಿಲ್ಲ;
ಮನೆಯ ಗೋಡೆಗಳಿಗಲ್ಲ,
ಮನಗಳ ನಡುವಿನ ಅಂತರವನ್ನೇ
ಕಡಿಮೆ ಮಾಡೋಣ.
ಮತ್ತೆ ಅರಳಲಿ
ಒಲವಿನ ಓಣಿಗಳು,
ನಗುವಿನ ಅಂಗಳಗಳು,
ಹಿರಿಯರ ಆಶೀರ್ವಾದದ
ಸಾನ್ನಿಧ್ಯ.
ಏಕೆಂದರೆ—
ಸಂಪತ್ತಿಗಿಂತ ಸಂಬಂಧವೇ
ಶ್ರೀಮಂತ;
ಮನೆಯ ಗಾತ್ರಕ್ಕಿಂತ
ಮನದ ವಿಶಾಲತೆಯೇ
ಬದುಕಿನ ನಿಜವಾದ ವೈಭವ.
---
ಸೂಚನೆ:
"ನಾವು ಸ್ನೇಹ, ಸಂಬಂಧಗಳನ್ನು ಆಲಂಗಿಸಬೇಕಾದ
ಕೈಗಳಿಂದಲೇ ಸಂಪತ್ತನ್ನು ಆಲಂಗಿಸಿದ್ದೇವೆ;
ಹಣವನ್ನು ಮುದ್ದಾಡುವ
ಧಾವಂತದಲ್ಲಿ, ಹೃದಯಗಳನ್ನು ಸ್ಪರ್ಶಿಸುವುದನ್ನೇ ಮರೆತಿದ್ದೇವೆ."
ಬರಹ:
✍️ *ಅಮರ್ಜಾ* - ಅಮರೇಗೌಡ ಪಾಟೀಲ ಜಾಲಿಹಾಳ, - ಮೊ. 9900504639
- ಕಿರಣ್ ದಾನಿ, ಸಂಪಾದಕರು, ರಣಗಲ್ ನ್ಯೂಜ್. © ಸರ್ವ ಹಕ್ಕು ಕಾಯ್ದಿರಿಸಲಾಗಿದೆ.
All Rights Reserved: The complete rights of this column belong to 'RanagalNewz'. Republishing parts or the entirety of this article without prior permission is unlawful. Copyright © 2026

