ಯೋಗಾಭ್ಯಾಸದಿಂದ ಜೀವನಕೆ
ಹೊಸತೊಂದು ಲಯ ದೊರಕಿತು;
ಚಂಚಲ ಮನದ ಅಲೆಗಳಿಗೆ
ಶಾಂತಿಯ ತೀರ ಸಿಕ್ಕಿತು ॥
ಆರೋಗ್ಯವು ಅರಳಿ ನಿಂತು
ಚೇತರಿಕೆಯ ಬೆಳಕು ಮೂಡಿತು;
ಸೋಮಾರಿತನದ ಮೋಡ ಸರಿದು
ಉತ್ಸಾಹದ ಸೂರ್ಯ ಉದಯಿಸಿತು ॥
ದಿನಚರಿಗೊಂದು ಶಿಸ್ತು ಲಭಿಸಿ
ಹೆಜ್ಜೆಗಳಿಗೊಂದು ದಿಕ್ಕು ದೊರಕಿತು;
ಅವ್ಯವಸ್ಥೆಯ ಆಗರದೊಳಗೆ
ಸಮತೋಲನದ ಪಥ ಬೆಳಗಿತು ॥
ಔಷಧಿಯ ಅವಲಂಬನೆ ತೊರೆದು
ನಿಧಾನವಾಗಿ ಮುಕ್ತಿ ಸಿಕ್ಕಿತು;
ಪ್ರಕೃತಿಯ ಸ್ಪರ್ಶದ ಕೊಡುಗೆಯು
ದೇಹಕೆ ಹೊಸ ಶಕ್ತಿ ತುಂಬಿತು ॥
ಆಹಾರದ ಕ್ರಮವ ಕಲಿಸಿ
ಭಾರದ ಹೊರೆ ಇಳಿಸಿತು;
ಹಗುರಗೊಂಡ ನರನಾಡಿಗಳಲಿ
ಲವಲವಿಕೆಯ ಚೈತನ್ಯ ತುಂಬಿತು ॥
ಯೋಗವು ಕೇವಲ ವ್ಯಾಯಾಮವಲ್ಲ,
ಅದೊಂದು ಜೀವನ ಪದ್ಧತಿ;
ದೇಹ-ಮನಗಳ ಸಮ್ಮಿಲನದಿ
ಆತ್ಮವಿಶ್ವಾಸ ಅರಳಿತು ॥
ಯೋಗದ ಅನುಗ್ರಹದಿಂದ
ಅಂತರಂಗವು ಬೆಳಗಿತು;
ಆರೋಗ್ಯ,
ಶಾಂತಿ, ಸಂತೃಪ್ತಿಯ
ಅಮೃತಧಾರೆ ಹರಿಯಿತು ॥
**
"ಯೋಗ ನನಗೆ ಆರೋಗ್ಯವಷ್ಟೇ ಅಲ್ಲ,
ಹೊಸ ಜೀವನವನ್ನೇ ನೀಡಿತು."
ಅಮರ್ಜಾ; ಅಮರೇಗೌಡ ಪಾಟೀಲ ಜಾಲಿಹಾಳ ಕುಷ್ಟಗಿ. - ಮೊ. 9900 504 639
ಅರ್ಪಣೆ: ಆರೋಗ್ಯ ಜೀವನದ ಮಾರ್ಗದರ್ಶಕರಾದ - ಶ್ರೀ ವೀರು ಪಾಟೀಲ, 🙏
All Rights Reserved: The complete rights of this column belong to 'RanagalNewz'. Republishing parts or the entirety of this article without prior permission is unlawful. Copyright © 2026
