ಭರತಭುವಿಗೆ ಶತಶಃ ನಮಃ
🚩
ಭರತಭುವಿಯಲಿ ಮಾನವನಾಗಿ
ಜನಿಸುವುದೇ ಮಹಾಭಾಗ್ಯವು;
ಪಶುವಾಗಿಯಾದರೂ ಹುಟ್ಟಲಿ,
ಮರಗಿಡವಾಗಿಯಾದರೂ ಬೆಳೆಯಲಿ ॥
ಕನಿಷ್ಠತಮ ಬಂಡೆಯಾದರೂ ಸರಿಯೇ
ಈ ಪುಣ್ಯಭೂಮಿಯಲಿ ನೆಲಸಿರಲಿ;
ಕಾರಣವಿದೆ—ಶಿಲೆಯೂ ಇಲ್ಲಿ
ಭಗವಂತನಾಗುವ ಅವಕಾಶವಿದೆ ॥
ನದಿಗಳು ತೀರ್ಥದ ಹೊನಲಂತೆ,
ಗಾಳಿಯು ಮಂತ್ರದ ನಿನಾದದಂತೆ
ಮಣ್ಣಿನ ಕಣಕಣದಲ್ಲಿಯೂ ನೆಲೆದಿದೆ
ಋಷಿಮುನಿಗಳ ತಪದ ಪ್ರಸಾದ ॥
ತ್ಯಾಗ-ಯೋಗ, ಧರ್ಮ-ಕರುಣೆ—
ಸಾಧುಸಂತರ ಪುಣ್ಯಭೂಮಿಯಿದು;
ಜನ್ಮವೆಂಬುದು ಇಲ್ಲಿ ವರವಾದರೆ,
ಮರುಜನ್ಮಕ್ಕೂ ಇಲ್ಲಿಯೇ ಆಸರೆಯಿದೆ ॥
ದೇವಾನುದೇವತೆಗಳ ದೇಶವಿದು,
ದೈವತ್ವದ ದಿವ್ಯ ಸಂದೇಶ ಹೊತ್ತ,
ಜಡದಲ್ಲಿಯೂ ಚೈತನ್ಯ ಕಂಡ
ಭರತಭೂಮಿಗೆ ಶತಶಃ ನಮಃ ॥
*
ಬರಹ:
✍️ *ಅಮರ್ಜಾ* - ಅಮರೇಗೌಡ ಪಾಟೀಲ ಜಾಲಿಹಾಳ, - ಮೊ. 9900504639
All Rights Reserved: The complete rights of this column belong to 'RanagalNewz'. Republishing parts or the entirety of this article without prior permission is unlawful. Copyright © 2026
